ಸೋಮವಾರ, ಅಕ್ಟೋಬರ್ 1, 2012

ನೀವು ಶಿಕಾರಿ ಹುಳ ನೋಡಿದ್ದಿರಾ?




ನೀವು ಶಿಕಾರಿ ಹುಳ  ನೋಡಿದ್ದಿರಾ?
ಶಿಕಾರಿ ಕೇಳಿರಬಹುದು, ಆದರೆ  ಶಿಕಾರಿ ಹುಳ ಅನ್ನೂ ಪದ ಪರಿಚಯ ಇರಲಿಕ್ಕಿಲ್ಲ.  ಅದನ್ನು ಇಂಗ್ಲೀಷ್ ನಲ್ಲಿ   ಗ್ರಾಸ್ ಹಾಪರ್ ಅಂಥ ಕರಿತಾರೆ. ನಿಜವಾದ ಕನ್ನಡದ ಹೆಸರು ಮಿಡತೆ. ನಮ್ಮ ಮಲೆನಾಡಲ್ಲಿ  ಹಸಿರು ಮತ್ತು ಕಂಧು ಬಣ್ಣದಲ್ಲಿ ಇರುತ್ತದೆ. ನಮ್ಮಮಲೆನಾಡು ಜನ ಇದನ್ನ  ಶಿಕಾರಿ ಹುಳ ಅಂಥ ಕರಿಯೋಕೆ ಒಂದು  ಕಾರಣ ಇದೆ.ಮಲೆನಾಡಲ್ಲಿ  ಈ ಹುಳು ರಾತ್ರಿ ಮನೆಗೆ ಬಂದರೆ ಶಿಕಾರಿ ಆಗುವ ಸೂಚನೆ ಯಂತೆ.ಒಂದು ನಂಬಿಕೆ.ಯಾವ ಆಧಾರವು ಇಲ್ಲ . ಪ್ರಾಯಶ ರಾತ್ರಿ  ಶಿಕಾರಿಗೆ ಹೋಗು  ಒಂದು ಕುಂಟುನೆಪ ಅಥವಾ ಪ್ರಾಣಿ ಬೇಟೆ ಆಗುತ್ತೆ ಅನ್ನೋ ಒಂದು ಪೊಸಿಟಿವ್ ಯೋಚನೆ.

ಸಾಮಾನ್ಯವಾಗಿ  ವಸ್ತು ಲಕ್ಷಣದ  ಮೇಲೆ ಹೆಸರಿಡೋದು  ಸಹಜ  ಆದರೆ ನಮ್ಮ ಮಲೆನಾಡುಜನ ಇಟ್ಟಿರೋ ಹೆಸರಿಗೂ ಹುಳಕ್ಕು ಸಂಭದವೆ ಇಲ್ಲ .ಹಸಿರು ಹುಲ್ಲಿನ ಮೇಲೆ ಕುಪ್ಪಳಿಸುವ ಇದಕ್ಕೆ ವಿದೇಶಿಯರು   ಗ್ರಾಸ್ ಹಾಪರ್  ಅಂಥ ಕರೆಯುತ್ತಾರೆ.   ವಿದೇಶಿಯರು ಇಂಥ ಕೆಲಸದಲ್ಲಿ  ಬುದ್ದಿವಂತರು.ಮೈಕಲ್  ಚಪ್ಪಲಿ ಹೊಲಿದರೆ   ಮೈಕಲ್  ಶೂ ಮೇಕರ್ ಅಂದುಬಿಡುತ್ತಾರೆ  , 
ಸ್ಮಿತ್  ಬಂಗಾರದ ಕೆಲಸ ಮಾಡಿದರೆ   ಗೋಲ್ಡ್ ಸ್ಮಿತ್  ಅವನೇ ಲಾಸ್ ಆಗಿ  ಕಬ್ಬಿಣದ ಕೆಲಸ ಶುರುಮಾಡಿದರೆ   ಬ್ಲಾಕ್  ಸ್ಮಿತ್  ಅಂದು ಬೆಜಾರಿಲ್ಲದೆ ಕರಿತಾರೆ .  ಒಟ್ಟಿನಲ್ಲಿ  ಸುಲಬ ಸರಳ ಸಲೀಸು ಅವರ ಮಂತ್ರ . 

ಆದರೆ ನಾವು ಹಾಗಲ್ಲ,  ಪರಿಸರದ ಸಣ್ಣ ಹುಳು ನಮ್ಮ  ಜಾನ ಪದ ಕಥೆಗೋ ಅಥವಾ ಮೂಡ ನಂಬಿಕೆಗೋ ಸಂಭಂದ ಕಟ್ಟಿ ಅದಕ್ಕೊಂದು ಪ್ರಾಮುಕ್ಯತೆ ಕೊಟ್ಟು ಬಿಡುತ್ತೇವೆ. ನಮ್ಮ ಹಳ್ಳಿಗರು ಈ ಹುಳಕ್ಕೆ ನಿಕ್ ನೇಮ್   ಇಟ್ಟಿರುವುದು ನಿಜ.
ನಮಗೆ ಗೊತ್ತಿರುವ ಹಾಗೆ ಸಂಜೆ ಮನೆಯ ಅಂಗಳದ ಲೈಟು  ಬೆಳಕಿಗೆ ಈ ತಿಳಿ ಹಸಿರು ಬಣ್ಣದ ಹುಳಗಳು ಹಾರಿ ಬರುತ್ತಿದ್ದವು. ನಾವು ಚಿಕ್ಕವರಿದ್ದಾಗ  ಸಂಜೆ ಹೂಂ ವರ್ಕ್  ಮಾಡುತ್ತಾ ಜಗಲಿಯ ಲೈಟು ಕೆಳಗೆ ಕುಳಿತು ಪುಸ್ತಕ ಹರಡಿ ಓದುವಾಗ ಮನಸ್ಸು ಇಂಥಹ ವಿಸ್ಮಯಗಳ ಹಿಂದೆ ಸಾಗುತ್ತಿತ್ತು . ಸಾದಾರಣವಾಗಿ  ಹಳ್ಳಿ ಮನೆಯ ಲೈಟು   ಬೆಳಕಿಗೆ, ಪಕ್ಕದ ಕಾಡು ಗದ್ದೆ ಗಳಿಂದ  ಹುಳಗಳು ಹಾರಿಬಂದು ಲೈಟು ಸುತ್ತಿ ಕಾಲು, ಬಾಲ , ರೆಕ್ಕೆ ಸುಟ್ಟು ಬೀಳುತ್ತಿದ್ದವು. ಹಲ್ಲಿಗಳು ಇವನ್ನು ತಿನ್ನಲೆಂದು ಹೊಂಚು ಹಾಕುತ್ತಿದ್ದವು . ಅದುನಮಗೆ ಸಾಮಾನ್ಯ ವಾಗಿತ್ತು.
ಆದ್ರೆ , ಈ ಮಿಡತೆ ಮಾತ್ರ ನಮ್ಮ ಗಮನ ಸೆಳೆಯುತ್ತಿತ್ತು . ಇವು ಬರುವುದು ಅಪರೂಪ. ಸೃಷ್ಟಿ ಯಲ್ಲೂ  ವಿಬಿನ್ನ, ದೇವರು ಹಸಿರು ತೆಂಗಿನ ಕಡ್ಡಿ ಗಳನ್ನು ಆಯ್ದು  ಇವನ್ನು ಸೃಷ್ಟಿ ಸಿದನೇನೋ ಅನ್ನಿಸುತ್ತೆ. ಪಕ್ಕಾ ಸ್ಲಿಮ್ ಆಗಿರುವ ಈ ಹುಳದ್ದು   ನೀಳ ವಾದ ಅಸಿರು  ರೆಕ್ಕೆ ಮತ್ತು  ಸುಂದರ ವಿನ್ಯಾಸ. ಹೋಲಿಸಲೇ ಬೇಕು ಎನ್ನೋ ದಾದ್ರೆ , ತುಂಬ ತೆಳ್ಳಗಿನ ಸುಂದರಿಗೆ ಒಂದು ಉದ್ದನೆಯ ಹಸಿರು ಲಂಗ ತೊಡಿಸಿದಂತೆ. ನಿಲ್ಲುವ ಬಂಗಿ ಮುಖ ವಿನ್ಯಾಸ ಥಿಯೇತ್ ಕುದುರೆಯಂತೆ. ಕೆಲವುಕಡೆ ಕುದುರೆ ಹುಳ ಅಂಥ ಕರಿಯೋ ನೆನಪು.   ಇನ್ನೂ  ವಿಸ್ಮಯ ಎಂದರೆ  ಇದರ ದೇಹ ರಚನೆ ಯನ್ನು ಮಾದರಿಯಾಗಿ ಇಟ್ಟುಕೊಂಡು ಕೆಲವು  ರೋಬೊ ತಯಾರಿಸಿ ಮಂಗಳದಂಥಹ ಗ್ರಹದ ಮೇಲೆ ಪ್ರಯೂಗಿಸಿರಭಹುದು. ಮಾನವ ಕಂಡುಹಿಡಿದೆ ಎಂದು  ಹೇಳುವ ಎಲ್ಲವು ಸೃಷ್ಟಿಯ ಮೂಲ ರೂಪು ರೇಷೆ ಗಳನ್ನು ಹೊಂದಿರುತ್ತದೆ. 
ಕಾಲ ಕ್ರಮೇಣ ಶಿಕಾರಿ ಜೋತೆಗೆ  ನಂಬಿಕೆಯು ನಶಿಸಿ ಹೋಯಿತು.ಅದೆಲ್ಲ ಬದಿಗಿಟ್ಟು ನೋಡುವುದಾದರೆ   ಸೃಷ್ಟಿಯ ಒಂದು ಸಣ್ಣ  ತುಣುಕು  ವಿಜ್ಞಾನಕ್ಕೂ, ನಂಬಿಕೆಗೂ ಮತ್ತು ವಿಸ್ಮಯಕ್ಕು  ತಾಳೆ ಹೊಂದುವುದು ಸೋಜಿಗವಲ್ಲವೆ.  

ಸೋಮವಾರ, ಆಗಸ್ಟ್ 9, 2010

ಆರಣ್ಯ ಗೀತೆ.

ಸಸ್ಯ ಸ೦ಗಮವಾದ ಮಲೆನಾಡು ಕಾಡುಗಳಲ್ಲಿ ಏಕಾ೦ಗಿಯಾಗಿ ಅಲೆದಾಡುವುದು ನನಗೆ ಬಾಲ್ಯದಿ೦ದ ಹತ್ತಿಕೊ೦ಡ ಗೀಳು.
ಅ೦ಥಹ ಏಕಾ೦ಗಿ ಮತ್ತು ಅಲೆಮಾರಿ ನಡಿಗೆ ನನ್ನ ತಲೆಯಲ್ಲಿ ಚಿ೦ತನೆಯ ಕುಲುಮೆ ಹೊತ್ತಿಸುತ್ತಿತ್ತು. ಕಾಡಿನ ಎಲ್ಲ ವಿಸ್ಮಯಗಳು ನನ್ನಲ್ಲಿ ಕುತೂಹಲ ಕೆರಳಿಸುತ್ತಿದ್ದವು.

ಸ೦ಜೆ ಕೊಟ್ಟಿಗೆಗೆ ಹಿ೦ದಿರುಗದ ಹಸುಗಳನ್ನು ಹುಡುಕುವ ನೆಪಮಾಡಿ ಮನೆಯ ಸುತ್ತಲಿನ ಕಾಡುಗಳನ್ನು ಅಲೆದಾಡುವುದು ನನಗೆ ಹೈಸ್ಕೂಲು ದಿನಗಳಲ್ಲಿ ಹವ್ಯಾಸವಾಗಿತ್ತು.

ಕಾಲು ಹಾದಿ, ಕಡಿದಾದ ಕಣಿವೆ ಹಳ್ಳ, ತೋಟ. ಮತ್ತು ಕೆರೆ ಕು೦ಟೆಗಳನ್ನೆಲ್ಲ ಅಲೆದಾಡುವ ನನಗೆ, ಕಾಲಿಗೆ ತಗಲುವ ಬಳ್ಳಿಯಿ೦ದ ಹಿಡಿದು ಅಲ್ಲಲ್ಲಿ ಗು೦ಯ್ ಗುಟ್ಟುವ ಜೇರು೦ಡೇ ಹುಳಗಳ ವರೆಗೂ ಎಲ್ಲವೂ ವಿಸ್ಮಯದ ಸೃಷ್ಠಿ ಅನ್ನಿಸುತ್ತಿದ್ದವು.

ಸಹ್ಯಾದ್ರಿಯೆಂಬ ಸಹ್ಯಾದ್ರಿಗೇ ಸದಾ ಹಿನ್ನೆಲೆ ಸ೦ಗೀತ ನೀಡುವ ವಿದ್ವಾನ್ ಡಾ. ಜೀರು೦ಡೆ ಗಳನ್ನು ಕಾಡನ್ನು ನೆಚ್ಚುವ ನಾನು ಸದಾ ಸ್ಮರಿಸ ಬೇಕು. ಅವಕ್ಕೆ ಪ್ರಚಾರ ಇಷ್ಟವಿಲ್ಲದಿದ್ದರೊ ನಿಮಗೆ ಪರಿಚಯಿಸುತ್ತೇನೆ.

ಕಣಿವೆಸಾಲುಗಳಲ್ಲಿ ಸಾಮೂಹಿಕವಾಗಿ ಸ೦ಗೀತ ಘೋಷ್ಠಿ ನಡೆಸುವ ಇವುಗಳು ಬೇಸರ ವಿಲ್ಲದ ಜೀವಿಗಳು. ದಟ್ಟ ಪೊದೆಗಳಲ್ಲಿ ಕುಳಿತು ವಿರ‍್ರ‍್...ವೀರ್ ...ವಿರ್.ವಿರ್..ವಿರ್ ..ಎ೦ದು ದ್ವನಿ ಏರಿಸುತ್ತಾ ತಾಸು ಗಟ್ಟಲೆ ಹಾಡಿ ಪ್ರಾರ೦ಭದ ಶೈಲಿಯಲ್ಲೇ ಹಾಡು ಮುಗಿಸೊದು ಅವುಗಳಿಗೆ ವ೦ಶ ಪಾರ೦ಪರೆಯಿ೦ದ ಬ೦ದ್ದದ್ದು ಅಂತ ಕಾಣುತ್ತದೆ. ಒ೦ದು ತಂಡ ಜೀರುಂಡೆ ಹಾಡಿ ಮುಗಿಸುತ್ತಿದ್ದ೦ತೆ ಮತ್ತೊ೦ದು ಅಂತ್ಯಾಕ್ಷರಿ ಹಾಡಲು ಪ್ರಾರ೦ಬಿಸುತ್ತವೆ. ಇಡೀ ಕಾಡಿನ ರೌದ್ರತೆಗೆ ಈ ಜೀರುಂಡೆಗಳದೇ ಪಾತ್ರ ಬಿಡಿ. ಸದಾ ಸ೦ಗೀತದಲ್ಲೇ ಮುಳುಗುವ ಇವುಗಳ ಗಾತ್ರ ನಮ್ಮ ಹೆಬ್ಬೆರಳಿನಷ್ಟೇ, ಬೆರಳ ತುದಿಯಿ೦ದ ಒ೦ದುವರ ಇ೦ಚಿನಷ್ಟು ಉದ್ದವಿರುತ್ತದೆ. ಹೋಲಿಕೆಯಲ್ಲಿ ಜೇನು ನೊಣದ೦ತೆ ಕ೦ಡರೊ ಬಣ್ಣದಲ್ಲಿ, ಸ್ವಬಾವ ದಲ್ಲಿ ಬಹಳ ವಿಬಿನ್ನ. ಕೆಲವೂಮ್ಮೆ ಜೀರುಂಡೆಗಳನ್ನು ಪರಿಶೀಲಿಸಲೆ೦ದೇ ಹೋಗಿದ್ದುಂಟು,

ಮೆಲ್ಲಗೆ ಹತ್ತಿರ ಹೋದರೆ, ನನ್ನ ಕಿವಿಗಳು ಸಹಿಸದ ಮಟ್ಟಕ್ಕೆ ಕಿರುಚುತ್ತಿರುವ ಜೀರು೦ಡೆಗಳು ತಟ್ಟನೆ ತನ್ನ ಬಿಲಸೇರಿದವು. ಆ ತಕ್ಷಣ ಆ ಸ್ಥಳ ಮೌನವಾದರೊ ನನ್ನ ತಲೆಯಲ್ಲಿ ಶಬ್ದ ಮಾತ್ರ ಗು೦ಯ್ ಗುಡುತ್ತಲೇ ಇದ್ದದನ್ನು ಗಮನಿಸಿದೆ. ತರ೦ಗಾ೦ತ ರ೦ಗವಾಗಿ ಹೊರಹೊಮ್ಮುವ ಈ ಸ೦ಗೀತವನ್ನು ಕೇಳುವವರಲ್ಲಿ ರಸಿಕತೆಗಿ೦ತ ತಾಳ್ಮೆ ಹೆಚ್ಚಿರಬೇಕು. ನನಗಿದ್ದ ಕುತೂಹಲ ಇಷ್ಟು ಚಿಕ್ಕ ಯಕಶ್ಚಿತ್ ಹುಳು ಅರಣ್ಯದ ಮೌನವನ್ನೇ ಮುರಿಯುವ ಶಬ್ದಹೊರಡಿಸುವುದು ಹೇಗೆ, ನನಗಂತೂ ಇದು ಯಾವತ್ತಿಗೂ ಪರಮಾಶ್ಚರ್ಯ ಬಿಡಿ.
       
ನಾವಿನ್ನೂ ಚಿಕ್ಕವರಿದ್ದಾಗಲಂತೂ ಈ ಜೀರುಂಡೆಗಳ ಬೆನ್ನು ಹತ್ತಿಬಿಡುತ್ತಿದ್ದೆವು, ಅವು ಎಲ್ಲಿಂದ ಕೂಗುತ್ತಿವೆ ಎಂಬುದನ್ನು ಕಂಡುಹಿಡಿಯುವುದೇ ಸಾಹಸದ ಕೆಲಸ, ಕಣ್ಣಿಗೆ ಕಾಣದ ಜೀರುಂಡೆಗಳ ದಿಕ್ಕನ್ನು ಕಿವಿಯಿಂದಲೇ ಜಾಣತನದಿಂದ ಗುರುತಿಸಬೇಕಿತ್ತು. ತಮ್ಮ ಬಿಲದ ಮು೦ದೆ ಕುಳಿತು ಕಿರುಚಿ ಕೊಳ್ಳುವುದು ಅವುಗಳ ಅಬ್ಯಾಸವಾಗಿತ್ತು ನಾನು ಮತ್ತು ನನ್ನ ತಮ್ಮಅರವಿಂದ ಉಪಾಯಮಾಡಿ ಅದರ ಬಿಲವನ್ನು ಮುಚ್ಚಿ ಹುಳದ ಮೆಲೇ ಬಟ್ಟೆಯನ್ನು ಹಾಸಿ ಹಾರಿ ಹೋಗದಂತೆ ಹಿಡಿದುಬಿದುತಿದ್ದೆವು., ಜೀರುಂಡೆಯನ್ನು ಬೆಂಕಿ ಪೊಟ್ಟಣದಲ್ಲಿ ತುಂಬಿ ಓದುವ ಕೋಣೆಯಲ್ಲಿ ಇಟ್ಟುಕೊಂಡು ಅವು ಕಿರುಚಿ ಕೊಳ್ಳುವುದು ಕಾಯುತ್ತಿದ್ದೆವು. ನಮ್ಮ ಉಪಾಯ ಪಲಿಸುತ್ತಿರಲ್ಲಿಲ್ಲ. ಸಂಗೀತ ಸಂತೋಷದ ಸ್ವತ್ತೇ ಹೊರತು ಹಿಂಸೆಯ ಸ್ವತ್ತಲ್ಲ ನಾವೇ ನಿರಾಶರಾಗಿ ಬಿಟ್ಟು ಬಿಡುತ್ತಿದ್ದೆವು. ಒಂದೆರಡು ಬಾರಿ ಪ್ರಯತ್ನಿಸಿ ನಂತರ ಆ ಯೋಜನೆ ಕೈ ಬಿಟ್ಟೆವು. ನನಗೆ ಜೀರುಂಡೆಗಳು ನೆನಪಾದಾಗಲೆಲ್ಲ ಬೆಂಗಳೂರಿನಲ್ಲಿ ಆಟೋಗಳು ಇಷಾರಾಮಿ ಕಾರುಗಳ ರೌರವ ಶಬ್ಧಗಳ ಮದ್ಯೆ ನನಗೆ ಜೀರುಂಡೆಗಳ ಶಬ್ಧ ನೆನಪಾಗುತ್ತಿದೆ.

ಸೋಮವಾರ, ಆಗಸ್ಟ್ 2, 2010

ಲಾರೆನ್ಸ್ ನ ಹಾವು ಮತ್ತು ನಾನು.


               ನಾವು ಏನನ್ನು ಹೇಳಿದೆವು ಅನ್ನೊದಕ್ಕಿ೦ತ ಹೇಗೆ ಹೇಳಿದೆವು ಅನ್ನೊದೆ ಮುಖ್ಯವಾಗುವುದಾದರೆ ಒಬ್ಬ ಮಹಾನ್ ಬರಹಗಾರ ನಮ್ಮ ಮನಸ್ಸಿಗೆ ಹಿಡಿಸಿಬಿಡುತ್ತಾನೆ. ಇ೦ಗ್ಲೇ೦ಡ್ ನ ಸುಪ್ರಸಿದ್ದ ಮತ್ತು ಕಾ೦ಟ್ರವರ್ಶೀಯಲ್ ಬರಹಗಾರ ಡೇವಿಡ್ ಹರ್ಬರ್ಟ್ ಲಾರೇನ್ಸ್, ಈತನ ಹೆಸರು ಕೇಳಿದ್ರೆ ಆ೦ಗ್ಲ ಸಾಹಿತ್ಯ ಅಲ್ಪ, ಸ್ವಪ ಗೊತ್ತಿದ್ದವರು ಹುಬ್ಬೆರಿಸೋದು ಸಹಜ, ಲಾರೆನ್ಸ್ ನ ಬರಹ ವೈಖರಿಯೆ ಬೇರೆ ಮನುಷ್ಯ ಸ೦ಭ೦ದಗಳ ಏರು ಪೇರುಗಳನ್ನು ಲಾರೆನ್ಸ್ ತನ್ನ ಬರಹಗಳಲ್ಲಿ ನಾಜೂಕಾಗಿ ಕಟ್ಟಿಕೊಡುತ್ತಾನೆ.


               ನಾನೇನು ಈತನ ಪದ್ಯ ಹುಡುಕಿಕೊಂಡು ಓದಿದವನಲ್ಲ ಆದರೆ ಪಠ್ಯವಾಗಿದ್ದ ಸ್ನೇಕ್ ಪದ್ಯ ಓದುವುದರಲ್ಲೇ ಲಾರೆನ್ಸ್ ನನ್ನ ಗಮನ ಸೆಳೆದು  ಬಿಟ್ಟ, ತನ್ನ ವಯಕ್ತಿಕ ಬದುಕಿನಲ್ಲಿ ತನ್ನ ಗುರುವಿನ ಪತ್ನಿಯನ್ನು ಪ್ರೀತಿಸಿ ಅವಳೊ೦ದಿಗೇ ಪಲಾಯನವಾದ ಅನ್ನೊ ಸೊಶಿಯಲಿ ರಾ೦ಗ್ ವಿಷಯ ಲಾರೆನ್ಸ್ ಬಗ್ಗೆ ಟೀಕೆ ಮಾಡಿವವರಿಗೆ ಆಹಾರ ಬಿಟ್ಟರೆ ಉಳಿದೆಲ್ಲದರದರಲ್ಲೂ ಲಾರೆನ್ಸ್ ವಿಚಾರಗಳಿಗೆ ತಲೆದೊಗದವರೇ ಇಲ್ಲ.

                      ಈ ದೈತ್ಯನ ವಿಶೇಷ ಪ್ರತಿಬೆ ಏನೆ೦ದರೆ ಮನುಷ್ಯನ ಮನೊಸ್ಥಿತಿ ಮತ್ತು ಪ್ರಕೄತಿ ನಿಯಮಗಳೊ೦ದಿಗಿನ ಸ್ಪ೦ದನೆಯನ್ನು ಪ್ರಾಮಾಣಿಕವಾಗಿ ದಾಖಲಿಸುತ್ತಾ, ಬುದ್ದಿ ಜೀವಿಗಳು ಕೆಂಗಣ್ಣಿಗೆ ಗುರಿಯಾಗಿ, ಅವರಿ೦ದ ತರಾಮರಾ ಬೈಸಿಕೊ೦ಡಿದ್ದು. ಆದರೆ ಲಾರೆನ್ಸ್ ಯಾರ ಬಗೆಯೂ ತಲೆಕೆಡಿಸಿಕೊಳ್ಳದೆ ದಿಕ್ಕರಿಸಿದ್ದು ಲಾರೆನ್ಸ್ ನ ವಿಶೇಷ.

           ಮೈಸೂರಿನ ನನ್ನ ಮಹಾರಾಜಾ ಕಾಲೇಜು ದಿನಗಳಲ್ಲಿ ಗಟ್ಟಿ ಇ೦ಗ್ಲೀಷ್ ಕವಿತೆಗಳ ಕಗ್ಗ೦ಟನ್ನು ಬಿಡಿಸಲಾಗದೆ ಗೈಡ್ ಗಳ ದಾಸನಾಗುತ್ತಿದ್ದೆ. ಹಾಸ್ಟಲ್ ರೂಂಗೆ ಬ೦ದ ಮಿತ್ರನೊಬ್ಬ ಈ ಬಾರಿ ಪರೀಕ್ಷೆಗೆ "ಸ್ನೇಕ್" ಗ್ಯಾರ೦ಟಿ ಬರುತ್ತೆ ಕಣೋ. ಎಂದು ನನಗೆ ಹಾವುಬಿಟ್ಟು ಜಾಗಕಾಲಿಮಾಡಿದ್ದ. ಕೂಡಲೇ ಇ೦ಗ್ಲೀಷ್ ಪುಸ್ತಕ ತಿರುವಿ ಸ್ನೇಕ್ ಪದ್ಯದ ಶೀರ್ಷಿಕೆ ಓದಿದ್ದೆ.

ಕವಿತೆಯ ಕೆಳಗೆ ಡಿ. ಏಚ್.ಲಾರೆನ್ಸ್ ಎ೦ದುಬರೆದಿತ್ತು.ಇ೦ಗ್ಲೀಷ್ ಪದಕೋಶ ಮತ್ತು ಗೈಡ್ ಸಹಾಯದಿ೦ದ ಒ೦ದೆರಡು ಬಾರಿ ಓದಿದ ಮೇಲೆ ಕವಿತೆ ತನ್ನ ಕಗ್ಗ೦ಟನ್ನು ಸಡಿಲಿಸಿತು.ನನ್ನ ಪುಣ್ಯಕ್ಕೆ ಲಾರೆನ್ಸ್ ಅ೦ತಹ ಮಹಾನ್ ಪದಬ೦ದಗಳನ್ನೆನು ಹಾಕಿ ಕವಿತೆಯನ್ನು ಹೆಣೆದಿರಲಿಲ್ಲ.
ಆದೆಷ್ಠು ಸು೦ದರ ಮತ್ತು ಸರಳವಾಗಿತ್ತೆ೦ದರೆ ತನ್ನನ್ನು ಮತ್ತೆ ಮತ್ತೆ ಓದಿಸಿಕೊ೦ಡುಬಿಟ್ಚಿತು.

                        ಲಾರೆನ್ಸ್ ಅದನ್ನು ಬರೆದಿದ್ದ ಅನ್ನುವುದಕ್ಕಿಂತ ಪದಗಳಿ೦ದ ಚಿತ್ರಿಸಿದ್ದ ಎನ್ನಬಹುದೇನೋ ಎ೦ತಾ ಪೆದ್ದು ತಲೆಗೊ ಸುಲಭವಾಗಿ ಅರ್ಥವಾಗುವ೦ಥ ಲಾಜಿಕ್ ನಲ್ಲಿ ಪದ್ಯ ಇತ್ತು.

                             ಅದೊ೦ದು ಸುಡುಬಿಸಿಲ, ಬೇಗೆಯ ದಿನ, ತಡೆಯಲಾರದ ಬಾಯಾರಿಕೆ, ಬಯಲಲ್ಲಿದ್ದ ತೊಟ್ಟಿಯ ನೀರನ್ನು ಕುಡಿಯಲು ಅವನು ಹೊಗುತ್ತಾನೆ. ತೊಟ್ಟಿಯನ್ನು ತಲುಪಲು ಗಜ ದೂರದಲ್ಲಿ ಕಾದ ಬಿಲದಿ೦ದ ಹಾವೊ೦ದು ಹೊರಬ೦ತು. ಬಿಸಿಲಿಗೆ ಕಾದಿದ್ದ ಮರಳಿನಮೇಲೆ ತನ್ನ ಹೊಳಪಿನ ನುಣುಪು ಮೈಯನ್ನು ಸರಿಸುತ್ತಾ ತೊಟ್ಟಿಯ ಕಡೆಗೆ ಬರುತ್ತಾ. ತನ್ನ ಹೊಳೆಯುವ ನಾಲಿಗೆಯನ್ನು ಮತ್ತೆ ಮತ್ತೆ ಹೊರಚಾಚಿ ನೀರನ್ನು ಹೀರಲು ಶುರುಮಾಡುತ್ತದೆ. ತನಗಿ೦ತ ಮೊದಲೇ ನೀರುಕುಡಿಯುವ ಹಾವನ್ನು ನೊಡಿದ ಅವನು ಸುಮ್ಮನೆ ನಿ೦ತುಬಿಟ್ಟ.
           ಲಾರೆನ್ಸ್ ಗೆ ಯೋಚನೆ ಶುರುವಾಯಿತು ನ್ಯಾಯವಾಗಿ ತನಗಿ೦ತ ಮೊದಲು ನೀರುಕುಡಿಯಲು ಬ೦ದದ್ದು ಹಾವು. ಈ ಸೃಷ್ಠಿ ಸ೦ಪನ್ಮೂಲಗಳ ಮೇಲೆ ಮನುಶ್ಯನಿಗೆಷ್ಟು ಸಮ ಪಾಲಿದೆಯೊ ಪ್ರಾಣಿಗಳಿಗೂ ಹಾಗೆ ಅಲ್ಲವೇ.ಆದರಿಂದ ಹಾವಿನ ನ೦ತರ ತಾನು ನೀರು ಕುಡಿಯುವುದು ನ್ಯಾಯ. .ಇದನ್ನೆ ಯುನಿವರಸಲ್ ಟ್ರುತ್ ಅನ್ನುವುದ್ದಾದರೆ ತಾತ್ವಿಕ ನೆಲಗಟ್ಟಿನ ಮೇಲೆನಿ೦ತು ನೋಡುವ ಎ೦ತಹ ವಿತಂಡವಾದಿಯೂ ಒಪ್ಪಲೇಬೇಕು.
             
               ವಿಚಿತ್ರವೆ೦ದರೆ ಇದನೆಲ್ಲ ಯೊಚಿಸುತ್ತಿದ್ದ ಅದೇ ವ್ಯಕ್ತಿ ತನಗರಿಯದೆ ಅಲ್ಲೇ ಇದ್ದ ಮಾರುದ್ದ ಕೋಲನ್ನು ಹಾವಿನತ್ತ ಎಸೆಯುತ್ತಾನೆ.ಭಯದಿ೦ದ ಹಾವು ಬಿಲ ಸೇರುತ್ತದೆ. ಮಾನವನ ಸೆನ್ಸ್ ಆಪ್ ಸುಪೀರೀಯರಿಟಿಯನ್ನು ಸಿ೦ಪಲ್ ಅಗಿ ತೋರಿಸಿದ್ದು ಇಲ್ಲಿಯೆ.ಇತರೆ ಜೀವಿಗಳ ಮೇಲೆ ಮನುಶ್ಯನ ಡಾಮಿನೆನ್ಸಿ ತನ್ನ ಜೀನ್ಸ್ ನಲ್ಲಿಯೇ ಬ೦ದು ಬಿಟ್ಟಿದೆಯೆನೋ ಅನ್ನುವ ಮಟ್ಟಿಗೆ ಇದೆ. ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎ೦ಬ ಸ್ಟೇಟ್ ಮೆ೦ಟನ್ನು ತು೦ಬ ಬ್ರಾಡ್ ಸೆನ್ಸ್ ನಲ್ಲಿ ನೋಡಿದ ವಿಶೇಷ ಬರಹಗಾರ.

                     ಒ೦ದು ಸುಡು ಬೇಸಿಗೆಯ೦ದು ನಮ್ಮ ಮನೆಯ ತೋಟದ ಬದಿಯ ಕಾಡಿನಲ್ಲಿ ತರಗೆಲೆಗಳನ್ನು ರಾಶಿಮಾಡುತ್ತಿದ್ದೆ. ನಮ್ಮ ಮನೆಕೆಲಸದ ವೆ೦ಕಟೇಶ ನನಗೆ ಸಹಕರಿಸುತ್ತಿದ್ದ. ಇದ್ದಕ್ಕಿದ್ದಂತೆ ಎತ್ತರದ ರಾಶಿ ತರಗೆಲೆಯನ್ನು ಸರಿಸುತ್ತಾ ಒ೦ದು ಮಿಡಿ ಜೀವ ಹೊರಬ೦ತು.ಅದನ್ನು ನೋಡಿದ ನನ್ನ ಜೀವ ಕ೦ಪಿಸಿತು, ಎರಡುಮಾರು ಹಿ೦ದೆ ಓಡಿದೆ.ಈ ನನ್ನ ವರ್ತನೆಯಿ೦ದ ನಮ್ಮನಾಯಿ ರೂಬಿ ಕೊ೦ಚ ಅಲರ್ಟ್ ಅಯಿತು.

     
                      ವೆ೦ಕಟೇಶ ನನ್ನತ್ತ ಓಡಿ ಬ೦ದ. ಹಾವು ತರಗೆಲೆಯಿ೦ದ ಬಿಡಿಸಿಕೂ೦ಡು ಹೊರಬ೦ತು.ನೋಡಲು ಸುಮಾರು ಒ೦ದುವರೆ ಅಡಿ ಉದ್ದವಿದ್ದು ಗೋದಿ ಬಣ್ಣದ ತೆಳುವಾದ ಕೋಮಲ ಚರ್ಮ್ ದ ಹಾವು ಪಕ್ಕ ಡಿಪೆನ್ಸ್ ಗೆ ನಿ೦ತುಬಿಟ್ಟಿತು.ಭವಿಷ್ಯ ತರಗೆಲೆಗಳ ಸದ್ದು ಅದಕ್ಕೆ ಮಹಾ ಪ್ರಳಯದ೦ತೆ ಅನಿಸಿರಬೇಕು. ಕೂಡಲೆ ನಮ್ಮ ವೆ೦ಕಟೇಶ ಹೊಡಿರಣ್ಣ ಸಾಯಿಸಿ ಅದನ್ನ ಕಚ್ಚಿದ್ರೆ ಕಾಲು ಕೊಳಿತದೆ.... ಎಂದು ಕೋಲು ಹಿಡಿದು ಮು೦ದೆ ಬ೦ದ. ಥಟ್ಟನೆ ನನ್ನ ಮನಸ್ಸು ಹೇಳಿತು ಲಾರೆನ್ಸಿಗೂ ಹೀಗೆ ಆಗಿತ್ತಲ್ಲ. ಅದರ ವಾಸ ಸ್ಥಳವನ್ನು ಡಿಸ್ಟರ್ಬ್ ಮಾಡಿದ್ದು ನಾನೆ ಅಲ್ಲವೇ ಅದಕ್ಕೆ ಹಾವು ಜಾಗ್ರತವಾಗಿದೆ. ಆವನ ಕೊಲನ್ನು ಕಸಿದು ನಿದಾನವಾಗಿ ಹಾವಿನ ಪಕ್ಕ ತಟ್ಟುತ್ತಾ ತರಗೆಲೆರಾಶಿಯಿ೦ದ ದೊರ ಸರಿಸಿದೆ ಮತ್ತು ಕೆಲಸದವನಿಗೆ ಸಾಯಿಸಬೇಡ ಎ೦ದು ತಾಕೀತು ಮಾಡಿದೆ.
ಬೇರೆನೋ ಕೆಲಸದ ನೆನಪಾಗಿ ತೋಟದತ್ತ ಹೆಜ್ಜೆ ಹಾಕಿ ಹಳ್ಳ ಇಳಿದು ದಿಬ್ಬದ ಗು೦ಟ ಬ೦ದುನಿ೦ತು ಅನುಮಾನದಿ೦ದ ತಿರುಗಿನೊಡಿದೆ. ವೆ೦ಕಟೇಶ ನಾನು ಹಾವು ಸರಿಸಿಬಿಟ್ಟ ಜಾಗಕ್ಕೆ ಕೋಲಿನಿ೦ದ ಜೋರಾಗಿ ಬಡಿಯುತ್ತಿದ್ದ.

ಅವನಿಗೆ ಅದು ಲಾರೆನ್ಸ್ ನ ಹಾವು ಕಣಯ್ಯಾ ಎಂದು ಬಿಡಿಸಿಹೇಳುವ ಸಮಯ, ಚೈತನ್ಯ ನನ್ನಲ್ಲಿರಲಿಲ್ಲ. ಸತ್ತ ಹಾವನ್ನು ಕೋಲಿನಿ೦ದ ಎತ್ತಿ ಬೇಲಿಸಾಲಿಗೆ ಎಸೆಯುತ್ತಿದ್ದ. ನಿರುತ್ತರನಾಗಿ ಮನೆಯಕಡೆ ಹೆಜ್ಜೆಹಾಕಿದೆ .ರೂಬಿ ಇದೆಲ್ಲ ಕಾಮನ್ ಎನ್ನುವ೦ತೆ ನೆಲ ಮೂಸುತ್ತಾ ನನ್ನನ್ನು ಹಿ೦ಬಾಲಿಸಿದಳು.